Monday, December 16, 2013

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ



ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 9 ಅನ್ನು ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಕಾರ್ಯವನ್ನು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿದೆ.

ಗಡಿ ಪ್ರವೇಶದ ಭಂಗೂರ ಗ್ರಾಮದಿಂದ ರಾಜೇಶ್ವರ ವರೆಗೆ ಹೆದ್ದಾರಿ ಅಕ್ಕಪಕ್ಕದಲ್ಲಿ ಬೆಳೆದಿರುವ ಮರಗಳನ್ನು ಕಡಿಯುವ ಕೆಲಸ ಭರದಿಂದ ಸಾಗಿದೆ. ಮಾವು, ಆಲ, ನೀಲಗಿರಿ ಜಾತಿಯ ಮರಗಳು ಧರೆಗುರುಳಿ­ಸುತ್ತಿರುವುದು ಪರಿಸರ ಪ್ರೇಮಿಗಳಿಗೆ ನೋವುಂಟು­ಮಾಡಿದೆ.

ಹೆದ್ದಾರಿ ಮಧ್ಯದಿಂದ 25 ಮೀಟರ್ ವಿಸ್ತೀರ್ಣದ ಅಂತರದಲ್ಲಿ ಬರುವ ಎರಡು ಬದಿಯ ಎಲ್ಲಾ ಮರಗಳನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಭಂಗೂರ ಗ್ರಾಮದಿಂದ ರಾಜೇಶ್ವರವರೆಗೆ ವಿವಿಧ ಬಗೆಯ ಮರ­ಗಳನ್ನು ಕಡಿಯಲಾಗುತ್ತಿದೆ.

25 ಮೀಟರ್ ಅಂತರದಿಂದ ಹೊರಗೆ ಉಳಿದ ಮರಗಳು ಆ ಭೂಮಿ ಒಡೆತನದ ರೈತರಿಗೆ ಉಳಿಯಲಿವೆ’ ಎಂದು ಹುಮನಾಬಾದ್ ವಲಯ ಅರಣ್ಯ ಅಧಿಕಾರಿ ಚಿಕ್ಕಮಠ ಮಾಹಿತಿ ನೀಡಿದ್ದಾರೆ. ಚತುಷ್ಪಥ ರಸ್ತೆಯು ರಸ್ತೆ ನಿರ್ಮಾಣ ಕಾರ್ಯದ ಬಳಿಕ ಅರಣ್ಯ ಇಲಾಖೆಯು ಹೆದ್ದಾರಿಯ ಎರಡು ಬದಿಗಳಲ್ಲಿ ವಿವಿಧ ತಳಿಯ ಹೊಸ ಸಸಿಗಳು ನೆಡಲಾಗುತ್ತದೆ ಎಂದರು.

source:http://splashurl.com/on3w2wx

No comments:

Post a Comment